ಉಡುಪಿ: ಭಾರತೀಯ ನೌಕಾಪಡೆಯ ಪೈಲಟ್ ಆಗಿ ನೇಮಕಗೊಂಡಿರುವ ನಮ್ಮ ಸಮಾಜದ ಹೆಮ್ಮೆಯ ಕುವರಿ ಸೀಮಾ ತೆಂಡೂಲ್ಕರ್ ಪೆರ್ಣಂಕಿಲ ಇವರನ್ನು ಜೂ.15 ರಂದು ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ ಮಣಿಪಾಲದಲ್ಲಿ ಸಂಘದ ವತಿಯಿಂದ ಭಾರತದ ಆರ್ ಎಸ್ ಬಿ ಸಮಾಜದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಮಾಜದ ಹಿರಿಯರು ಮತ್ತು ಗಣ್ಯರ ಸಮ್ಮುಖದಲ್ಲೂ ಅಭಿನಂದಿಸಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷರಾದ ಶ್ರೀಶ ನಾಯಕ್ ಪೆರ್ಣಂಕಿಲ, ಸಂಘದ ಗೌರವ ಸಲಹೆಗಾರರಾದ ಎಂ ಗೋಕುಲದಾಸ್ ನಾಯಕ್ ಮಂಗಳೂರು, ಸಂಘದ ಉಪಾಧ್ಯಕ್ಷರು ಚೇತನ್ ನಾಯಕ್ ಕಾರ್ಕಳ, ಸಂಘದ ಕಾರ್ಯದರ್ಶಿ ನಿತ್ಯಾನಂದ ನಾಯಕ್ ನರಸಿಂಗೆ, ಸಂಘದ ಕೋಶಾಧಿಕಾರಿ ಜಯರಾಮ್ ಪ್ರಭು ಉಡುಪಿ, ಸಂಘದ ಜೊತೆಕಾರ್ಯದರ್ಶಿ ರಂಜಿತ್ ಕೆ ಎಸ್ ಪುನಾರು , ಆರ್ ಎಸ್ ಬಿ ಮಹಿಳಾ ವೇದಿಕೆ ಅಧ್ಯಕ್ಷರಾದ ಶ್ರೀಮತಿ ರೂಪ ನಾಯಕ್ ಪರ್ಕಳ, ಆರ್ ಎಸ್ ಬಿ ಮಹಿಳಾ ಮಂಡಳಿ ಅಧ್ಯಕ್ಷರು ಶ್ರೀಮತಿ ಉಷಾ ನಾಯಕ್ ಕಾರ್ಕಳ ಮತ್ತು ಸೀಮಾ ರವರ ಪೋಷಕರು ಉಪಸ್ಥಿತರಿದ್ದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 Greycrust. All Rights Reserved.
Design by GreyCrust Solutions